Friday, 29 October 2021

ಶನಿವಾರ 30-10-2021 ಸಂಜೆ 6.00: ಯಕ್ಷಶೋಧಸಾರ-06: “ಯಕ್ಷಗಾನ ಪ್ರಸಂಗ: ಶ್ರವ್ಯಕಾವ್ಯ / ದೃಶ್ಯಕಾವ್ಯ” - ಯಕ್ಷಗಾನ ಪ್ರಸಂಗದ ರೂಪಾಂತರಗಳ ಅಧ್ಯಯನ


 ಆಮಂತ್ರಣ:


ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ


ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)


ಯಕ್ಷಶೋಧಸಾರ-06: “ಯಕ್ಷಗಾನ ಪ್ರಸಂಗ: ಶ್ರವ್ಯಕಾವ್ಯ / ದೃಶ್ಯಕಾವ್ಯ” - ಯಕ್ಷಗಾನ ಪ್ರಸಂಗದ ರೂಪಾಂತರಗಳ ಅಧ್ಯಯನ

ಉಪನ್ಯಾಸಕರು: ಪ್ರೊ. ಎಮ್.‌ ಎಲ್.‌ ಸಾಮಗ; ತೆಂಕು  ಬಡಗು ಯಕ್ಷಗಾನ ಕಲಾವಿದ, ತಾಳಮದ್ದಲೆ ಅರ್ಥದಾರಿ, ನಿವೃತ್ತ ಪ್ರಾಚಾರ್ಯ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಗೌರವಾಧ್ಯಕ್ಷ


ನಿರ್ವಹಣೆ: ಡಾ. ಸಿಬಂತಿ ಪದ್ಮನಾಭ, ಯಕ್ಷದೀವಿಗೆ (ರಿ)


ದಿನಾಂಕ ಶನಿವಾರ 30-09-2021 ಸಂಜೆ 6.00ರಿಂದ  7.30ರ ತನಕ


ಜ್ಹೂಮ್‌ ವೇದಿಕೆಯ ಕೊಂಡಿ:  https://us02web.zoom.us/j/84034088603

ಫೇಸ್ಬುಕ್‌ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana

Sunday, 24 October 2021

ಆಮಂತ್ರಣ: ಯಕ್ಷ ಸಾಹಿತ್ಯ ಸಾಂಗತ್ಯ-03 : ಶ್ರೀ ಎಸ್. ಆರ್. ವಿಜಯಶಂಕರ, ಖ್ಯಾತ ಸಾಹಿತಿಗಳು ಹಾಗೂ ವಿಮರ್ಶಕರು, ಅವರಿಂದ ಪಾರ್ತಿಸುಬ್ಬ ವಿರಚಿತ 'ಪಂಚವಟಿ' ಪ್ರಸಂಗದ ಸಾಹಿತ್ಯಾವಲೋಕನ

 


ಯಕ್ಷವಾಹಿನಿ (ರಿ), ಬೆಂಗಳೂರು

ಯಕ್ಷ ಸಾಹಿತ್ಯ ಸಾಂಗತ್ಯ-03
(ನಾಡಿನ ಖ್ಯಾತ ಕವಿಗಳು, ಚಿಂತಕರು, ವಿದ್ವಾಂಸರಿಂದ ಯಕ್ಷ ಪ್ರಸಂಗಗಳ ಸಾಹಿತ್ಯ ಅವಲೋಕನದ ಸರಣಿ ಕಾರ್ಯಕ್ರಮ)
ದಿನಾಂಕ: ಅಕ್ಟೋಬರ್ 24 ಭಾನುವಾರ, ಸಂಜೆ 5 ರಿಂದ
ಶ್ರೀ ಎಸ್. ಆರ್. ವಿಜಯಶಂಕರ, ಖ್ಯಾತ ಸಾಹಿತಿಗಳು ಹಾಗೂ ವಿಮರ್ಶಕರು, ಅವರಿಂದ ಪಾರ್ತಿಸುಬ್ಬ ವಿರಚಿತ 'ಪಂಚವಟಿ' ಪ್ರಸಂಗದ ಸಾಹಿತ್ಯಾವಲೋಕನ
ಮುಖ್ಯ ಅತಿಥಿಗಳು: ಮುಖ್ಯ ಅತಿಥಿಗಳು: ಶ್ರೀ ಪುರುಷೋತ್ತಮ ಬಿಳಿಮಲೆ, ಜಾನಪದ ವಿದ್ವಾಂಸರು ಹಾಗೂ ಸಾಹಿತಿಗಳು
ಸಮನ್ವಯ: ಡಾ. ಸಿ. ಆನಂದರಾಮ ಉಪಾಧ್ಯ, ಯಕ್ಷಗಾನ ವಿದ್ವಾಂಸರು
ಸಲಹೆ ಸಹಕಾರ: ಪ್ರೊ. ಎಮ್. ಎಲ್. ಸಾಮಗ, ಶ್ರೀ ಶ್ರೀಧರ ಡಿ. ಎಸ್., ಶ್ರೀ ಗಿಂಡಿಮನೆ ಮೃತ್ಯುಂಜಯ, ಶ್ರೀ ನಟರಾಜ ಉಪಾಧ್ಯ, ಶ್ರೀ ಅನಂತ ಪದ್ಮನಾಭ ಫಾಟಕ್, ಶ್ರೀ ಇಟಗಿ ಮಹಾಬಲೇಶ್ವರ ಭಟ್ ,ಶ್ರೀ ಅಜಿತ್ ಕಾರಂತ್ ಹಾಗೂ ಶ್ರೀ ಲನಾ ಭಟ್
ಪರಿಕಲ್ಪನೆ ಹಾಗೂ ಸಂಯೋಜನೆ: ಶ್ರೀ ರವಿ ಮಡೋಡಿ, ಬೆಂಗಳೂರು


YakshaVahini Prathistana ಪೇಸ್ಬುಕ್ ನಲ್ಲಿ ನೇರ ಪ್ರಸಾರ
ಸಂಪರ್ಕ ಸಂಖ್ಯೆ : 9986384205, 9632824391
ಸರ್ವರಿಗೂ ಸ್ವಾಗತ ಬಯಸುವ
ಯಕ್ಷವಾಹಿನಿ (ರಿ), ಬೆಂಗಳೂರು

Saturday, 16 October 2021

ಡಾ. ಆನಂದರಾಮ ಉಪಾಧ್ಯರ “ಯಕ್ಷದರ್ಶನ” ಪುಸ್ತಕದ ಪರಿಷ್ಕೃತ ಎರಡನೇ ಆವೃತ್ತಿಯ ಲೋಕಾರ್ಪಣೆಯಂದೇ ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಯೂ ಯಕ್ಷವಾಹಿನಿಯಯಕ್ಷಪುಸ್ತಕಕೋಶಕ್ಕೆ ಇಂದೇ ಸೇರ್ಪಡೆ!



 

ಅಕ್ಟೋಬರ೧೬, ೨೦೨೧

 

ಡಾ. ಆನಂದರಾಮ ಉಪಾಧ್ಯರ “ಯಕ್ಷದರ್ಶನ” ಪುಸ್ತಕದ ಎರಡನೇ ಪರಿಷ್ಕೃತ ಆವೃತ್ತಿಯು ಇಂದು ಯಕ್ಷವಾಹಿನಿಯ ಆನ್ಲೈನ್‌ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಯಕ್ಷಗಾನದ ಕುರಿತಾದ ಪುಸ್ತಕವೊಂದು ಎರಡನೇ ಆವೃತ್ತಿಯಾಗಿ ಹೊರಬರುವುದಲ್ಲದೇ, ಅದು ಮತ್ತಷ್ಟು ಪರಿಷ್ಕರಣಗೊಂಡಿರುವ ಹಿಂದಿನ ಲೇಖಕರ ಯಶಸ್ಸಿಗೆ ಅಭಿನಂದನೆಗಳು.

 

ವಿಶೇಷವೇನಂದರೆ, ಡಾ. ಆನಂದರಾಮ ಉಪಾಧ್ಯರು ತಾವೇ ಹಿಂದೆ ತೋರಿಸಿಕೊಟ್ಟ ಹೊಸ ಸಂಪ್ರದಾಯದಂತೆ, ಈ ಪರಿಷ್ಕೃತ ಆವೃತ್ತಿಯ ಅಂತರಜಾಲ ಪ್ರತಿಯನ್ನು ಯಕ್ಷವಾಹಿನಿಯ ಯಕ್ಷಪುಸ್ತಕಕೋಶಕ್ಕೆ ಅನುದಾನವಾಗಿ ಕೊಟ್ಟು, ಅಂತರಜಾಲ ಪ್ರತಿಯೂ ಇಂದೇ  ಲೋಕಾರ್ಪಣೆಯಾಗಲು ಸಹಕರಿಸಿದ್ದಾರೆ.

 

ಈ ಹಿಂದೆ, ಬೆಂಗಳೂರಿನ ಯಕ್ಷಗಾನದ ಹೆಜ್ಜೆಗುರುತುಗಳ ಸುತ್ತಲಿನ ಯಕ್ಷಪಥಎಂಬ ತಮ್ಮದೇ ಪುಸ್ತಕವು  ಲೋಕಾರ್ಪಣೆಯಾಗುತ್ತಿರುವಾಗಲೇ, ಅದರ ಅಂತರಜಾಲ ಪ್ರತಿಯನ್ನು ಕೂಡಾ  ಯಕ್ಷಪುಸ್ತಕಕೋಶಕ್ಕೆ ಸೇರಿಸುವ ಮೂಲಕ, ಉಚಿತ ಪ್ರಸಾರಕ್ಕಾಗಿ  ಅಂದೇ ಲೋಕಾರ್ಪಣೆ ಮಾಡಿದ ಅವರ ಉದಾರತೆಯನ್ನು ನೆನಪಿಸಿಕೊಳ್ಳುತ್ತಿದ್ದೇವೆ.

 

ಯಕ್ಷವಾಹಿನಿ ಸಂಸ್ಥೆಯ ಸ್ಥಾಪಕ ವಿಶ್ವಸ್ಥರು ಹಾಗೂ ಮೊದಲ ಕಾರ್ಯಾಧ್ಯಕ್ಷರು ಆಗಿರುವ ಆನಂದರಾಮ ಉಪಾಧ್ಯರು, ಈ ಅಂತರಜಾಲದ ಪ್ರತಿಯ ಉಚಿತ ಹಂಚುವಿಕೆಯ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದ್ದಲ್ಲದೇ, ಅದರ ಜವಾಬ್ದಾರಿಯನ್ನು ಯಕ್ಷವಾಹಿನಿ ಸಂಸ್ಥೆಗೆ ಒಪ್ಪಿಸಿರುವುದು ಅರ್ಥವತ್ತಾಗಿದೆ. “ಯಕ್ಷಗಾನಕ್ಕಾಗಿ ತನ್ನಿಂದ ಏನು?” ಎಂಬ ಪ್ರಶ್ನೆಯ ಸುತ್ತ ಮುಡಿಪಾಗಿ ತೊಡಗಿಕೊಂಡಿರುವ ಸ್ವಯಂಸೇವಕರ ಮುಡಿಪಿನ ಕೆಲಸಗಳಿಂದ ಸಾಧ್ಯವಾಗಿರುವ,  ಅಂತರಜಾಲದ ಮೂಲಕ ಉಚಿತ ಹಂಚುವಿಕೆಯ ಅನೇಕ ದಾಖಲಾತಿಯ ಯೋಜನೆಗಳ ಮಧ್ಯೆ, ಅವರೆಲ್ಲರಿಗೆ ನಾಯಕರೊಲ್ಲಬ್ಬರಾಗಿರುವ ಡಾ. ಆನಂದರಾಮ ಉಪಾಧ್ಯರು ಯಕ್ಚವಾಹಿನಿ ಸಂಸ್ಥ ಹಾಗೂ ಸಮೂಹದ ಮುಖ್ಯ ಚೇತನದ ಮುಖವಾಣಿಯಾಗಿ ಈ ಉದಾರತೆಯ ಮೂಲಕ ಇನ್ನಷ್ಟು ಬೆಳಗುತ್ತಿದ್ದಾರೆ.

 

ಯಕ್ಷವಾಹಿನಿಯ ಸಹಯೋಗದ ಮೂಲಕ ಲೋಕಾರ್ಪಣಗೋಳ್ಳುತ್ತಿರುವ ಯಕ್ಷದರ್ಶನಪುಸ್ತಕದ ಪರಿಷ್ಕೃತ ಎರಡನೇ ಆವೃತ್ತಿಯನ್ನು ಓದಲು ಮತ್ತು ಕೆಳಗಿಳಿಸಿಕೊಳ್ಳಲು ಈ ಕೆಳಗಿನ ಕೊಂಡಿಯನ್ನು ಒತ್ತಿ:

https://drive.google.com/file/d/1JTMw52bQXBNAdVKEcwjgqKplGyP12W3i/view?usp=sharing

 

ಸ್ವಯಂಸೇವಕರ ಬಲ ಹೆಚ್ಚಿದಂತೆ ಹೆಚ್ಚಿನ ಯೋಜನೆಗಳನ್ನೂ ಹಾಗೂ ಹಾಲಿ ಯೋಜನೆಗಳ ಆಳ ವಿಸ್ತಾದಗಳನ್ನು ಸದಾ ವಿಸ್ತರಿಸುವ ಕುರಿತು ಯಕ್ಷವಾಹಿನಿಯ ನಾಯಕತ್ವವು ಸದಾ ಹಪಹಪಿಸುತ್ತಿದೆ. ಉಚಿತ ಪ್ರಸಾರಕ್ಕೆ ಸಿಗುವ ಎಲ್ಲಾ ಪ್ರಸಂಗಪ್ರತಿಗಳನ್ನು ಕ್ರೋಢಿಸುತ್ತಾ ಹೋಗುವ ಪ್ರಸಂಗಪ್ರತಿಸಂಗ್ರಹಎಂಬ ನಮ್ಮ ಯೋಜನೆಯು ಸಾಕಷ್ಟು ಯಶಸ್ಸನ್ನು ಕಂಡಿರುವುದರಿಂದ, ಅದೇ ರೀತಿಯಲ್ಲಿ ಪ್ರಸಂಗೇತರ ಇತರ ಯಕ್ಷಗಾನ ಪುಸ್ತಕಗಳ ಉಚಿತ ಪ್ರಸಾರಕ್ಕಾಗಿಯೇ ಯಕ್ಷಪುಸ್ತಕಕೋಶಎಂಬ ಹೊಸ ಯೋಜನೆಯು ಈಗಾಗಲೇ ಜಾರಿಯಲ್ಲಿದೆ.  ಇಂದಿನ ಯಕ್ಷದರ್ಶನ ಪುಸ್ತಕವು ೫೩ನೇ ಪುಸ್ತಕವಾಗಿ ಸೇರ್ಪಡೆಯಾಗುತ್ತಿದೆ.

 

ಯಕ್ಷಪುಸ್ತಕಕೋಶದ ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ:

https://drive.google.com/file/d/1xKHXsUslzMR5tRYyTRp7hbyFFXX9zV79/view?usp=sharing


ಯಕ್ಷವಾಹಿನಿಯ ಕಾರ್ಯಾಧ್ಯಕ್ಷ ಪದವಿಯನ್ನು ಯುವ ನಾಯಕರಾದ ರವಿ ಮಡೋಡಿ ಅವರ ಹೆಗಲಿಗೇರಿಸಿ, ಸಂಸ್ಥೆಯ ಏಳಿಗೆಯ ರಾಯಭಾರಿಯಾಗಿ ದುಡಿಯಲು ಹೊರಟಿರುವ ಡಾ. ಆನಂದರಾಮ ಉಪಾಧ್ಯರು ತನ್ನ ಇತಿಮಿತಿಗಳ ನಡುವೆ ಈ ರೀತಿಯ ಅಭೂತಪೂರ್ವ ಚೇತನವನ್ನು ಹುಟ್ಟಿಸುವ ಪ್ರಯತ್ನಗಳ ಮೂಲಕ ಯಕ್ಷವಾಹಿನಿಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಬುದ್ಧ ಸಂಸ್ಥೆ ಹಾಗೂ ಸಮೂಹವಾಗಿ ಬೆಳೆಯುವತ್ತ ತಮ್ಮ ನಾಯಕತ್ವದ ಒಂದು ಝಲಕ್ ಅನ್ನು ಪದೇ ಪದೇ ತೋರಿಸಿ ನಮ್ಮೆಲ್ಲರನ್ನೂ ಮೆಚ್ಚಿಸಿದ್ದಾರೆ.

 

ಈ ಶುಭ ಸಂದರ್ಭದಲ್ಲಿ ನಾವು ಪ್ರಾರ್ಥಿಸುವದಿಷ್ಟೇ: ಡಾ. ಆನಂದರಾಮ ಉಪಾಧ್ಯರಿಟ್ಟ ಹೆಜ್ಜೆಯ ದಾರಿಯಲ್ಲಿಯೇ, ಎಲ್ಲಾ ಕನ್ನಡದ ಹಾಗೂ ಯಕ್ಷಗಾನದ ಲೇಖರುಗಳು ಹಾಗೂ ಪ್ರಕಾಶಕರುಗಳು ಅಂತರಜಾಲದ ಪ್ರತಿಗಳನ್ನು ಕೂಡಾ ಸಮಾನಾಂತರವಾಗಿ ಬಿಡುಗೊಡೆಗೊಳಿಸುವ ಉದ್ಯಮಶೀಲತೆಗೆ ಬದ್ಧರಾಗಲಿ. ಹಣಕಾಸಿನ ಮಿತಿಯನ್ನು ಮೀರಿ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯ ಮೂಲ ಕಾರಣಗಳಿಗಾಗಿ  ಪುಸ್ತಕಗಳನ್ನು ಬರೆಯುವ /  ಪ್ರಕಾಶಿಸುವ ಎಲ್ಲಾ ಲೇಖಕರು / ಪ್ರಕಾಶಕರುಗಳು ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಗಳನ್ನು ಕೊಡ ಮಾಡುತ್ತಾ ಹೋಗಲಿ, ಅಂತಹ ಪ್ರತಿಗಳ ದಾಖಲಾತಿ ಹಾಗೂ ಉಚಿತ ಪ್ರಸಾರದ ಸುತ್ತ ನಮ್ಮ ಸಂಸ್ಥೆ / ಸಮೂಹವು ಸದಾ ಮುಡಿಪಾಗಿದೆ. ಈ ಮುಡಿಪಿನ ಸುತ್ತ ಹೆಚ್ಚಿನ ಸಾಧನೆಯ ಸಾಕಾರಕ್ಕಾಗಿ ಇನ್ನೂ ಹೆಚ್ಚಿನ ಸ್ವಯಂಸೇವಕರ ಸಹಾಯ ಸಹಕಾರಗಳನ್ನು ಈ ಮೂಲಕ ಕೋರುತ್ತಿದ್ದೇವೆ.  ಸ್ವಯಂಸೇವೆಯ ಸಾಧ್ಯತೆ ಇಲ್ಲದವರು ನಮ್ಮ ಸಂಸ್ಥ ಹಾಗೂ ಯೋಜನೆಗಳನ್ನು ಬಲ ಪಡಿಸುವುತ್ತ ಹಣಕಾಸಿನ ಸಹಾಯ ಮಾಡುವಿದ್ದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿ ಹಣಕಾಸಿನ ಸಂಪನ್ಮೂಲದ ಬಲದಲ್ಲಿ ಹೆಚ್ಚಿನ ಕ್ರಿಯಾಶೀಲತೆಯತ್ತ ತೊಡಗಿಕೊಳ್ಳಲು ಸಿದ್ಧರಿದ್ದೇವೆ.

ಈ ಸಂದರ್ಭದಲ್ಲಿ ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಕೋಶ ಯೋಜನೆಗಳ ಸುತ್ತ ಯಕ್ಷಗಾನ ಪ್ರಸಂಗ ಪುಸ್ತಕಗಳ ಅಂತರಜಾಲ ಪ್ರತಿಗಳನ್ನು ಹುಟ್ಟಿಸಲು ಉದಾರತೆಯಿಂದ ಅನುಮತಿ ಕೊಟ್ಟ ನೂರಾರು ಪ್ರಸಂಗಕವಿಗಳಿಗೆ ಹಾಗೂ ಸಂಬಂಧಿತ ಪ್ರಕಾಶಕರಿಗೆ ನಮ್ಮ ನಮನಗಳು. ಇವರೆಲ್ಲರ ಈವರೆಗಿನ ಉದಾರತೆಯೇ ಡಾ. ಆನಂದರಾಮ ಉಪಾಧ್ಯರ ಪ್ರಸಂಗೇತರ ಪುಸ್ತಕಕ್ಕೂ ಈ ರೀತಿಯ ಅನುಮತಿ ಕೊಡುವತ್ತ ಮಾರ್ಗದರ್ಶಕವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು!

 

ಈ ಅಪೂರ್ವ ಸಂದರ್ಭದಲ್ಲಿ ಡಾ. ಆನಂದರಾಮ ಉಪಾಧ್ಯರು ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಹಾಗೂ ಯಶಸ್ಸನ್ನು ಕೋರುವ,

 

ಯಕ್ಷವಾಹಿನಿ ಆಡಳಿತ ಮಂಡಳಿ








Wednesday, 13 October 2021

ಆಮಂತ್ರಣ: "ಯಕ್ಷದರ್ಶನ" ಪರಿಷ್ಕೃತ ಎರಡನೇ ಆವೃತ್ತಿ ಪುಸ್ತಕ ಲೋಕಾರ್ಪಣೆ, “ಯಕ್ಷಕವಿ ನಮನ” ಉಪನ್ಯಾಸ ಸರಣಿ ಉದ್ಘಾಟನೆ, ಯಕ್ಷಕವಿ ನಮನ - ೦೧ : "ದಿ. ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ

 


ಆಮಂತ್ರಣ:

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ ಆನ್ಲೈನ್‌ ಕಾರ್ಯಕ್ರಮ:

ಪುಸ್ತಕ ಲೋಕಾರ್ಪಣೆ, “ಯಕ್ಷಕವಿ ನಮನ” ಉಪನ್ಯಾಸ ಸರಣಿ ಉದ್ಘಾಟನೆ, ಯಕ್ಷಕವಿ ನಮನ - ೦೧ : "ದಿ. ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ"

 ದಿನಾಂಕ ಶನಿವಾರ 16-10-2021 ಸಂಜೆ 6.00ರಿಂದ  7.30ರ ತನಕ

ಪುಸ್ತಕ ಲೋಕಾರ್ಪಣೆ, ಪುಸ್ತಕ ಪರಿಚಯ ಮತ್ತು ಯಕ್ಷಕವಿ ನಮನ ಸರಣಿ ಉದ್ಘಾಟನೆ: ಪ್ರೊ. ಎಮ್.‌ ಎಲ್.‌ ಸಾಮಗ ಅವರಿಂದ

ಯಕ್ಷಕವಿ ನಮನ -  ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಯುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ; ಪರಿಕಲ್ಪನೆ: ಶ್ರೀಧರ ಡಿ. ಎಸ್.

ಯಕ್ಷಕವಿ ನಮನ-೦೧: ದಿ. ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ

 


 


ಉಪನ್ಯಾಸಕರು: ಶ್ರೀ ಶ್ರೀಧರ ಡಿ. ಎಸ್.‌; ಪ್ರಸಂಗ ಕವಿ, ತಾಳಮದ್ದಲೆ ಅರ್ಥದಾರಿ, ಯಕ್ಷಗಾನ ವಿದ್ವಾಂಸ, ಕಾದಂಬರಿಕಾರ, ಲೇಖಕ

ಅತಿಥಿ: ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ; ಕವಿ, ನಾಟಕಕಾರ, ನಟ, ಲೇಖಕ

ನಿರ್ವಹಣೆ: ಡಾ. ಆನಂದರಾಮ ಉಪಾಧ್ಯ, ಕನ್ನಡ ಲೇಖಕ, ಯಕ್ಷಗಾನ ವಿದ್ವಾಂಸ


ಜ್ಹೂಮ್ ವೇದಿಕೆಯ ಕೊಂಡಿ:   

https://us02web.zoom.us/j/84776577644?pwd=ck1KcU8wSXZMQjZ0d2xCQVE3b2JUQT09

ಫೇಸ್ಬುಕ್ನಲ್ಲಿ ನೇರ ಪ್ರಸಾರ:  https://www.facebook.com/yakshavahiniprathistana








Friday, 24 September 2021

ಇಂದು ಆನ್ಲೈನಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ "ಕವಿ ಕಾವ್ಯ ವಿಚಾರ" ಪುಸ್ತಕ ಲೋಕಾರ್ಪಣೆ ಮತ್ತು ಕವಿ ಕಾವ್ಯದ ಕುರಿತಾಗಿ ಉಪನ್ಯಾಸ!

 

ಸೆಪ್ಟೆಂಬರ ೨೫, ೨೦೨೧

ಆಮಂತ್ರಣ:

ಮಾನ್ಯರೇ,

ಇಂದು, ಪೂರ್ವಯೋಜಿತವಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ  ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ) ಕಾರ್ಯಕ್ರಮದ ಅಂಗವಾಗಿ, ಉಪನ್ಯಾಸದ ಮೊದಲು ವಿಷಯಕ್ಕೆ ನೇರ ಸಂಬಂಧಿತವಾದ ಅವರ ಹೊಸ ಕೃತಿಯ ಲೋಕಾರ್ಪಣೆಯನ್ನು ಯಕ್ಷವಾಹಿನಿಯ ಆನ್ಲೈನ್‌ ವೇದಿಕೆಯಲ್ಲೇ ಮಾಡಲಾಗುವುದು. 

ಯಕ್ಷದೀವಿಗೆ, ತುಮಕೂರು ಇವರ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಈ ಅಂಗವು ಈಗ ಸೇರಿ ಹೋಗಿರುವುದು, ಯಕ್ಷಗಾನ ಪ್ರಪಂಚದಲ್ಲಿ ಸಹಯೋಗಗಳ ಮೂಲಕ  ಇನ್ನೂ ಹೆಚ್ಚಿನ ಸಾಧ್ಯತೆ ಹಾಗೂ ಸಾಧನೆಗಳನ್ನು ಅರಸುವಲ್ಲಿ ಯಕ್ಷವಾಹಿನಿಗೆ ಮತ್ತಷ್ಟು ಸ್ಫೂರ್ತಿಯನ್ನು ಕೊಡುತ್ತಿದೆ.

ಪುಸ್ತಕದ ಲೋಕಾರ್ಪಣೆಯನ್ನು ಯಕ್ಷಗಾನ ಸಂಶೋಧಕರು ಹಾಗೂ ವಿದ್ವಾಂಸರು, ಹಾಗೂ ನಮ್ಮವರೇ ಆದ ಡಾ. ಆನಂದರಾಮ ಉಪಾಧ್ಯರು ನಡೆಸಿಕೊಡುತ್ತಾರೆ. ಆನಂತರ ಅವರೇ ಪುಸ್ತಕ ಪರಿಚಯವನ್ನು ಕೂಡಾ ಸಂಕ್ಷಿಪ್ತವಾಗಿ ತಿಳಿಸುತ್ತಾರೆ.

ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು, ನಂತರ ನಡೆಸಿಕೊಡುವ ಉಪನ್ಯಾಸದಲ್ಲಿ ಪುಸ್ತಕದ ಹೂರಣವನ್ನೆಲ್ಲಾ ಅನಾವರಣಗೊಳಿಸಲಿರುವರು. ಉಪನ್ಯಾಸದ ನಂತರದ ಪ್ರಶ್ನೋತ್ತರದಲ್ಲಿ ಹೆಚ್ಚಿನ ಚರ್ಚೆಯನ್ನು ನಿರೀಕ್ಷಿಸಿರಿ.

ಈ ಹಿಂದೆಯೇ ಬಿತ್ತರವಾದ ಇಂದಿನ ಕಾರ್ಯಕ್ರಮದ ಆಮಂತ್ರಣದ ವಿವರವನ್ನು ಕೆಳಗೆ ಕೊಡಲಾಗಿದೆ. ಡಾ. ಕಬ್ಬಿನಾಲೆಯವರಿಂದ ಈ ಹಿಂದೆ ಪ್ರಕಟವಾದ ಹೆಚ್ಚಿನ ಪುಸ್ತಕಗಳ ಚಿತ್ರಾವಳಿಯನ್ನೂ ಕೆಳಗೆ ಕೊಡಲಾಗಿದೆ. ಪುಸ್ತಕಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಲೇಖಕರನ್ನು ನೇರವಾಗಿ ಸಂಪರ್ಕಿಸಿರಿ. ( 99450 55534)

ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಸಾರಸ್ವತ ಕಿರೀಟದಲ್ಲಿರುವ ಅನೇಕ ನವಿಲುಗರಿಗಳ ಮಧ್ಯೆ,  ಈ ಇನ್ನೊಂದು ನವಿಲುಗರಿ ಸೇರಿದುದಕ್ಕೆ ಅವರನ್ನು ಅಭಿನಂದಿಸುವ, ಹಾಗೂ ಇಂದಿನ ಕಾರ್ಯಕ್ರಮದಲ್ಲಿ ನಿಮ್ಮ ಉಪಸ್ಥಿತಿಯನ್ನು ಅಪೇಕ್ಷಿಸುವ,

ಯಕ್ಷವಾಹಿನಿ ಆಡಳಿತ ಮಂಡಳಿ. 

-----------------------------



ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ

ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

 ಯಕ್ಷಶೋಧಸಾರ-05: “ಯಕ್ಷಗಾನ ಕವಿ ಕಾವ್ಯ ಶೋಧ

 ಉಪನ್ಯಾಸಕರು: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ  - ಪ್ರಸಂಗ ಕವಿ, ಸಂಶೋಧಕ, ಸಾಹಿತಿ, ಅಷ್ಟಾವಧಾನಿ

 ನಿರ್ವಹಣೆ: ಶ್ರೀಮತಿ ಆರತಿ ಪಟ್ರಮೆ, ಧ್ಯಕ್ಷರು, ಯಕ್ಷದೀವಿಗೆ (ರಿ)

 ದಿನಾಂಕ ಶನಿವಾರ 25-09-2021 ಸಂಜೆ 6.00ರಿಂದ  7.30ರ ತನಕ

 ಜ್ಹೂಮ್ವೇದಿಕೆಯ ಕೊಂಡಿ:   

https://us02web.zoom.us/j/86267980832?pwd=NndvdlFWL2gzREJpWFZqdUsxTFJHQT09

ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/profile.php?id=100012390542277

-----------------------

ಡಾ. ಕಬ್ಬಿನಾಲೆಯವರ ಇತರ ಯಕ್ಷಗಾನ ಕೃತಿಗಳು:










ಡಾ. ಕಬ್ಬಿನಾಲೆಯವರ ಯಕ್ಷಗಾನೇತರ ಕೃತಿಗಳು: